ಮೌನದ ಸಂಭ್ರಮಾಚರಣೆ

ಯಾರು ನಿಮಗೆ ಎಲ್ಲವನ್ನೂ ಕೊಟ್ಟಿದ್ದಾರೆಯೋ ಅವರು ನಿಮಗೆ ಸ್ವಾತಂತ್ರವನ್ನು ಕೊಟ್ಟಿದ್ದಾರೆ.ಮೊದಲು ಆ ಸ್ವಾತಂತ್ರವನ್ನು ಗೌರವಿಸಿ, ನಂತರ ನಿಮಗೆ ನೀಡಲ್ಪಟ್ಟಿರುವ ಎಲ್ಲವುಗಳ ಉಪಯೋಗ ಮಾಡಿ.

ನಿಮ್ಮ ಸಂಕಲ್ಪಗಳು (ನೀವು ಮಾಡಬೇಕೆಂದುಕೊಂಡಿರುವ ನಿಮ್ಮ ಉದ್ದೇಶಗಳು) ಮತ್ತು ಆಸೆಗಳು ನಿಮ್ಮನ್ನು ದೇವರಿಂದ ದೂರಮಾಡುತ್ತವೆ.

ನಿಮ್ಮ ಎಲ್ಲಾ ಆಸೆ ಮತ್ತು ಸಂಕಲ್ಪಗಳನ್ನು ದೇವರಿಗೆ ಸಮರ್ಪಿಸಿಬಿಡಿ, ಆಗ ನೀವೇ ದೈವ....ನೀವೇ ದೇವರು....ನೀವು ಸ್ವತಂತ್ರರು....ನಿಮಗೆ ಯಾವುದರ ಅಭಾವವೂ ಇರುವುದಿಲ್ಲ

ಈ ಜಗತ್ತಿನ ಎಲ್ಲ ಕೆಲಸಗಳಲ್ಲಿ ಪ್ರಯತ್ನವೇ ಅವುಗಳ ಕೀಲಿಕೈ. ಆದರೆ ಅಂತಿಮವಾದ ಪೂರ್ಣತೆಗೆ ಅಪ್ರಯತ್ನವೇ ಅದರ ಕೀಲಿಕೈ.

 ನಿಮ್ಮ ಮನಸ್ಸು ನಿಮಗೆ ಸೇರಿದ್ದಲ್ಲ,ಅದನ್ನು ನಿಂದಿಸಬೇಡಿ

ಆ ಪರಮಾತ್ಮನು ಆಲಂಗಿಸಲಿ.