ಕಾರ್ಯಕ್ರಮದಲ್ಲಿ ಏನನ್ನು ಹೇಳಿಕೊಡಲಾಗುತ್ತದೆ?

ಸಮಗ್ರವಾದ ಪರಿಹಾರೋಪಯಗಳು
ನಮ್ಮ ಸಮಗ್ರವಾದ ಶೈಕ್ಷಣಿಕ ಪಠ್ಯಕ್ರಮವು, ವಿದ್ಯಾರ್ಥಿಗಳ ಯಶಸ್ಸಿಗಾಗಿ ಅವಶ್ಯಕವಾದ ಆರೋಗ್ಯಕರವಾದ ದೇಹ, ಆರೋಗ್ಯಕರವಾದ ಮನಸ್ಸು ಮತ್ತು ಆರೋಗ್ಯಕರವಾದ ಜೀವನಶೈಲಿಯ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಆರೋಗ್ಯಕರವಾದ ದೇಹ
ಯೋಗಾಸನಗಳ ಸರಣಿಗಳು, ವ್ಯಾಯಾಮಗಳು ಮತ್ತು ದೈಹಿಕ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ದೇಹವನ್ನು ಬಲಿಷ್ಠಗೊಳಿಸುವ ಸಲಹಾ ವಿಧಾನಗಳು. ಪೌಷ್ಠಿಕ ಆಹಾರದ ಸೇವನೆಗೆ ಪ್ರೋತ್ಸಾಹ.

ಆರೋಗ್ಯಕರವಾದ ಮನಸ್ಸು
ಉಸಿರಾಟದ ಪ್ರಕ್ರಿಯೆಗಳು ಒತ್ತಡ, ಕೋಪ ಮತ್ತು ಖಿನ್ನತೆಯನ್ನು ಕುಗ್ಗಿಸಿ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿಶ್ರಾಂತಿದಾಯಕ ವ್ಯಾಯಾಮಗಳು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ ಮತ್ತು ಮಾನವೀಯ ಮೌಲ್ಯಗಳನ್ನು ಪುನಶ್ಚೇತಗೊಳಿಸುತ್ತದೆ.

ಆರೋಗ್ಯಕರವಾದ ಜೀವನಶೈಲಿ
ವ್ಯಾಯಾಮಗಳು, ಚರ್ಚೆಗಳು, ಸಾಮಾಜಿಕ - ಭಾವನಾತ್ಮಕ ಜೀವನದ ಕುಶಲತೆಗಳ ಕಲಿಕೆ. ಇದರಿಂದ ಭಾವನೆಗಳ ನಿಯಂತ್ರಣ, ಸಮಸ್ಯೆಗಳ ನಿವಾರಣೆ, ಉತ್ತಮ ನಿರ್ಧಾರಗಳನ್ನು ಮಾಡಲು ಮತ್ತು ಒತ್ತಡವನ್ನು ನಿಭಾಯಿಸುವಲ್ಲಿ ಸಹಕಾರಿಯಾಗಿದೆ.
ಜೀವನ ಪರಿವರ್ತಕವಾದಂತಹ ಉಸಿರಾಟದ ಪ್ರಕ್ರಿಯೆ
ಸುದರ್ಶನ ಕ್ರಿಯೆ™
ಜೀವನಕ್ಕೆ ಪ್ರಯೋಜನಕಾರಿಯಾದ ಅನೇಕ ಪಾಠಗಳನ್ನು ನಾನು ಕಲಿತೆ. ಗುರುದೇವರಂತೆಯೇ ನಾನೂ ಕೂಡಾ ಎಲ್ಲರ ಮುಖಗಳ ಮೇಲೂ ಮುಗುಳ್ನಗೆಯನ್ನು ಮೂಡಿಸಿ ಅವರನ್ನು ಸಂತೋಷಪಡಿಸಲು ಬಯಸುತ್ತೇನೆ.

ಅಕ್ಷಯ್, 16
ವಿದ್ಯಾರ್ಥಿ
ಈಗ ನಾನು ಮೊದಲಿಗಿಂತ ಚೆನ್ನಾಗಿದ್ದೇನೆ. ನನ್ನಲ್ಲಿ ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸವಿದೆ. ಸುದರ್ಶನಕ್ರಿಯೆಯನ್ನು ಪ್ರತಿನಿತ್ಯ ಅಭ್ಯಾಸ ಮಾಡುತ್ತೇನೆ. ಇದರಿಂದ ನನ್ನ ಏಕಾಗ್ರತೆ ಹೆಚ್ಚಿದೆ, ನನ್ನ ಕಲಿಕೆಯ ಮಟ್ಟವೂ ಉತ್ತಮವಾಗಿದೆ.

ಶ್ರಿಯಾ, 15
ವಿದ್ಯಾರ್ಥಿನಿ
ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಮೊದಲು ನಾನು ನನ್ನ ಸಹಪಾಠಿಗಳೊಡನೆಯೂ ಮಾತನಾಡುತ್ತಿರಲಿಲ್ಲ. ಈಗ ನಾನು ನಮ್ಮ ಶಾಲಾಸಭೆಯಲ್ಲಿಯೂ ಧೈರ್ಯವಾಗಿ ಮಾತನಾಡಬಲ್ಲೆ!

ಮೀರಾ, 13
ವಿದ್ಯಾರ್ಥಿನಿ
ನನ್ನ ಸಾಮರ್ಥ್ಯ ಹೆಚ್ಚಾಗಿದೆ. ಸಂಗೀತದಲ್ಲಿ ನನ್ನ ಅಸಕ್ತಿ ಇನ್ನೂ ಹೆಚ್ಚಾಗಿದೆ. ಕ್ರೀಡೆಗಳಲ್ಲಿ ಮತ್ತು ಓದಿನಲ್ಲಿ ನನ್ನ ಸಾಧನೆ ಉತ್ತಮವಾಗಿದೆ. ಕಾರ್ಯಾಗಾರವು ಸಂಪೂರ್ಣವಾಗಿ ವಿನೋದಮಯವಾಗಿತ್ತು!

ಅಮೇಯ್, 10
ವಿದ್ಯಾರ್
ಸಂಸ್ಥಾಪಕರು
ಗುರುದೇವ ಶ್ರೀ ಶ್ರೀ ರವಿಶಂಕರ್
ಶಾಲೆಗಳಿಗಾಗಿ ಕಾರ್ಯಕ್ರಮಗಳು

ಉತ್ಕರ್ಷ ಯೋಗ
ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆರೋಗ್ಯವನ್ನು ಹೆಚ್ಚಿಸುತ್ತದೆ

ಮೇಧಾ ಯೋಗ ಲೆವೆಲ್ 1
ಒತ್ತಡವನ್ನು ಎದುರಿಸಲು, ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

