
Dec
21st
World Meditation Day
![]()
Join Live @Gurudev
● Livewith Gurudev Sri Sri Ravi Shankar
10 am ET8:30 pm IST3 pm GMT
Live with Gurudev Sri Sri Ravi Shankar
10 am ET 8:30 pm IST 3 pm GMT

44 ವರ್ಷಗಳು ಜೀವನ ಪರಿವರ್ತನೆಯ

10,000+ ವಿಶ್ವಾದ್ಯಂತ ಧ್ಯಾನ ಕೇಂದ್ರಗಳು

180 ದೇಶಗಳು

80 ಕೋಟಿಗೂ ಅಧಿಕ ಜನರನ್ನು ತಲುಪಿದೆ
ವಿಶ್ವ ಧ್ಯಾನ ದಿನ: ಒಂದು ಜಾಗತಿಕ ಕ್ರಾಂತಿ
ಕಳೆದ ನಾಲ್ಕು ದಶಕಗಳಿಂದ ಗುರುದೇವರು ಲಕ್ಷಾಂತರ ಜನರಿಗೆ ತಮ್ಮ ಅಂತರಂಗದ ಶಕ್ತಿಯನ್ನು ಕಂಡುಕೊಳ್ಳಲು ನೆರವು ನೀಡಿದ್ದಾರೆ. ತನ್ಮೂಲಕ ವ್ಯಕ್ತಿಗಳು, ಸಮುದಾಯಗಳು ಮತ್ತು ರಾಷ್ಟ್ರಗಳ ಪರಿವರ್ತನೆಗೆ ಕಾರಣರಾಗಿದ್ದಾರೆ. ಯುದ್ಧಗಳನ್ನು ಕೊನೆಗೊಳಿಸುವುದು ಮತ್ತು ಭಯೋತ್ಪಾದಕರನ್ನು ಶರಣಾಗತರಾಗುವಂತೆ ಮನವೊಲಿಸುವುದರಿಂದ ಹಿಡಿದು ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಮತ್ತು ರೈತರ ಸಬಲೀಕರಣದ ವರೆಗೆ ಗುರುದೇವರು ಧ್ಯಾನವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಗಮನಾರ್ಹ ಪರಿವರ್ತನೆಯನ್ನು ತರಲು ಪ್ರಯತ್ನಿಸಿ ಯಶಸ್ಸು ಕಂಡಿದ್ದಾರೆ. ಅವರ ಕಾರ್ಯಕ್ರಮಗಳ ಮೂಲಕ ಅಸಂಖ್ಯಾತ ಜೈಲು ಕೈದಿಗಳ ಹಾಗೂ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಪರಿವರ್ತನೆ ಉಂಟಾಗಿದೆ. ಯುವಕರಿಗಾಗಿ ಮಾದಕದ್ರವ್ಯ ವರ್ಜನ ಶಿಬಿರಗಳನ್ನು, ಕಾರ್ಪೊರೇಟ್ ಜಗತ್ತಿನ ಸ್ವಾಸ್ಥ್ಯಕ್ಕಾಗಿ ಹಾಗೂ ದೇಶ ದೇಶಗಳ ನಡುವೆ ಸಾಮರಸ್ಯವನ್ನು ಉಂಟು ಮಾಡುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ 180ಕ್ಕೂ ಹೆಚ್ಚು ದೇಶಗಳ ಕೋಟ್ಯಂತರ ಜನರ ಮೇಲೆ ಪ್ರಭಾವ ಬೀರಿದ್ದಾರೆ.
2024ರಲ್ಲಿ, ವಿಶ್ವಸಂಸ್ಥೆಯು ಡಿಸೆಂಬರ್ 21ನೇ ದಿನಾಂಕವನ್ನು ವಿಶ್ವ ಧ್ಯಾನ ದಿನವೆಂದು ಘೋಷಣೆ ಮಾಡಿತು. ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಗುರುದೇವರು ಡಿಸೆಂಬರ್ 21, 2024 ರಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಧ್ಯಾನದಲ್ಲಿ ಮಾರ್ಗದರ್ಶನ ನೀಡಿದ್ದು ಈ ವರ್ಷವೂ ದಿನಾಂಕ ಡಿಸೆಂಬರ್ 21ರಂದು ಮಾರ್ಗದರ್ಶನ ನೀಡಲಿದ್ದಾರೆ.
ಗುರುದೇವರ ಧ್ಯಾನ ಕಾರ್ಯಕ್ರಮಗಳ ಹೆಜ್ಜೆಗಳು
ಗುರುದೇವರ ಧ್ಯಾನ ಕಾರ್ಯಕ್ರಮಗಳ ಹೆಜ್ಜೆಗಳು
ಗುರುದೇವರಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ಥಾಪನೆ.
1981
ಸ್ಕಾಟ್ಲೆಂಡಿನ ಎಡಿನ್ಬರ್ಗ್ನಲ್ಲಿರುವ ಸ್ಕಾಟಿಷ್ ಸಂಸತ್ತಿನಲ್ಲಿ ಉಪನ್ಯಾಸ ನೀಡಲು ಗುರುದೇವರಿಗೆ ಆಹ್ವಾನ.
2004
ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರಜತಮಹೋತ್ಸವ ಕಾರ್ಯಕ್ರಮದಲ್ಲಿ 150 ದೇಶಗಳ 25 ಲಕ್ಷ ಜನರು ದೇಶವಿದೇಶಗಳಿಂದ ಆಗಮಿಸಿ ಉತ್ಸಾಹದಿಂದ ಭಾಗವಹಿಸಿ ಗುರುದೇವರ ಸಮ್ಮುಖದಲ್ಲಿ ಧ್ಯಾನ ಮಾಡಿದರು.
2006
ಗುರುದೇವರಿಂದ ವಾಷಿಂಗ್ಟನ್ ಡಿ.ಸಿ.ಯ ಜಾನ್ ಎಫ್ ಕೆನ್ನಡಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಭಾಂಗಣದಲ್ಲಿ ಮಾನವೀಯ ಮೌಲ್ಯಗಳ ಘೋಷಣಾ ವಾಕ್ಯದ ಅನಾವರಣ.
2007
151 ದೇಶಗಳ ಸುಮಾರು 70,000 ಜನರು ಜರ್ಮನಿ ದೇಶದ ಬರ್ಲಿನ್ ನಗರದ ಒಲಿಂಪಿಕ್ ಕ್ರೀಡಾಂಗಣದಲ್ಲಿ ಸೇರಿ ಜಗತ್ತಿನಾದ್ಯಂತ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಾಧನೆಗಳನ್ನು ಮತ್ತು ಜಗತ್ತಿನ ವಿವಿಧತೆಯನ್ನು ಸಂಭ್ರಮದಿಂದ ಆಚರಿಸಿದರು.
2011
ಅರ್ಜೆಂಟೀನಾ ದೇಶದ ಬ್ಯೂನೋಸ್ ಐರೀಸ್ ನಗರದಲ್ಲಿ ಗುರುದೇವರ ಜೊತೆ ಸುಮಾರು 1,50,000 ಜನರು ಮನೋಹರವಾದ ಸಂಗೀತ ಮತ್ತು ಮೌನಧ್ಯಾನದ ಅನುಭವವನ್ನು ಪಡೆದರು.
2012
ಆಫ್ರಿಕಾ ಖಂಡಕ್ಕಾಗಿ ಧ್ಯಾನ ಮಾಡುತ್ತೇನೆ (I Meditate Africa) - ಧ್ಯಾನವನ್ನು ಪ್ರಮುಖ ಸಾಧನವನ್ನಾಗಿ ಬಳಸಿಕೊಂಡು ಆಫ್ರಿಕಾ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸಿ ತನ್ಮೂಲಕ ಲಕ್ಷಾಂತರ ಜನರ ಜೀವನದ ಮೇಲೆ ಪ್ರಭಾವ ಬೀರುವ ಸರಳ ಪ್ರಚಾರಾಂದೋಲನವು ಪ್ರಾರಂಭವಾಯಿತು.
2013
ಗುರುದೇವರು ಇರಾಕ್ ದೇಶದ ಅತ್ಯಂತ ಅಪಾಯಕಾರಿ ಯುದ್ಧಪೀಡಿತ ಪ್ರದೇಶದಲ್ಲಿ ಸಂಚರಿಸಿ ಅಲ್ಲಿನ ಜನರನ್ನು ಸಂಪರ್ಕಿಸಿ ಸಾಂತ್ವನ ನೀಡಿದರು.
2015
ವಿಶ್ವ ಸಂಸ್ಕೃತಿ ಉತ್ಸವ II ಗುರುದೇವರ ಸಮ್ಮುಖದಲ್ಲಿ ಜಗತ್ತಿನ ಅತಿದೊಡ್ಡ ತೇಲುವ ವೇದಿಕೆಯ ಮೇಲೆ ಸುಮಾರು ನೂರು ದೇಶಗಳ ಕಲಾವಿದರು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸುಮಾರು 37.5 ಲಕ್ಷ ಜನರು ವೀಕ್ಷಿಸುವುದರ ಜೊತೆಗೆ ಧ್ಯಾನವನ್ನೂ ಮಾಡಿದರು.
2016
ಸುಮಾರು ಐದು ದೇಶಗಳಿಗಿಂತಲೂ ಹೆಚ್ಚುಕಾಲ ಸಂಘರ್ಷದಿಂದ ನಲುಗಿದ ಕೊಲಂಬಿಯಾ ದೇಶದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಎಫ್ಎಆರ್ಸಿ – ಕೊಲಂಬಿಯಾ ಶಾಂತಿ ಒಪ್ಪಂದವನ್ನು ಏರ್ಪಡಿಸುವ ಮೂಲಕ ಗುರುದೇವರು ಜಗತ್ತಿಗೆ ಧ್ಯಾನದ ಶಕ್ತಿಯನ್ನು ಪರಿಚಯಿಸಿದರು.
2016
ಬಗೆಬಗೆಯ ಸಂಗೀತ ಕಾರ್ಯಕ್ರಮಗಳು ಮತ್ತು ಪ್ರತಿಷ್ಠೆಯ ನಾಟಕ ಪ್ರದರ್ಶನಗಳಿಗೆ ಹೆಸರಾಂತ ವೇದಿಕೆಯಾಗಿರುವ ದಿ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ನೆರೆದ ಸಾವಿರಾರು ಜನರು ಗುರುದೇವರ ಮಾರ್ಗದರ್ಶನದಲ್ಲಿ ಧ್ಯಾನ ಮಾಡಿದ ಸಂದರ್ಭದಲ್ಲಿ ಸೂಜಿ ಬಿದ್ದರೂ ಕೇಳಿಸದ ಮೌನದ ವಾತಾವರಣವಿತ್ತು.
2016
ಯುರೋಪಿಯನ್ ಸಂಸತ್ತಿನಲ್ಲಿ ನಡೆದ “ಧ್ಯಾನಕ್ಕಾಗಿ ಧ್ಯಾನ (Meditation to Mediation)" ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಗುರುದೇವರು ಆಮಂತ್ರಿತರಾಗಿದ್ದರು.
2019
ಕೋವಿಡ್ ಮಹಾಮಾರಿಯು ಇಡೀ ಜಗತ್ತನ್ನು ಪೀಡಿಸುತ್ತಿದ್ದಾಗ ಕ್ಷೋಭೆಗೊಳಗಾದ ಲಕ್ಷಾಂತರ ಜನರು ಮಾನಸಿಕ ನೆಮ್ಮದಿಯನ್ನು ಗಳಿಸಿಕೊಂಡು ತಮ್ಮ ಅಂತರಂಗದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುವಂತೆ ಸುಮಾರು ಎರಡು ತಿಂಗಳಿಗೂ ಹೆಚ್ಚುಕಾಲ ದಿನಕ್ಕೆರಡು ಭಾರಿ ಅಂತರ್ಜಾಲದ ಮೂಲಕ ನೇರ ಧ್ಯಾನ ಕಾರ್ಯಕ್ರಮಗಳನ್ನು ಗುರುದೇವರು ನಡೆಸಿಕೊಟ್ಟರು.
2020
“ನಾನು ಶಾಂತಿಯ ಪರವಾಗಿ ನಿಲ್ಲುತ್ತೇನೆ” – ಯೂರೋಪ್ ದೇಶಗಳು ಯುದ್ಧ ಮತ್ತು ಸಂಘರ್ಷಗಳಿಂದ ಪೀಡಿತವಾಗಿರುವ ಸಂದರ್ಭದಲ್ಲಿ ಜನರಿಗೆ ಮನಃಶಾಂತಿಯನ್ನು ಕಂಡುಕೊಳ್ಳಲು ಸಹಾಯವಾಗುವಂತೆ ಗುರುದೇವರು ಯುರೋಪಿನ ದೇಶಗಳ ಮತ್ತು ಅಮೆರಿಕಾ ದೇಶದ ಪ್ರವಾಸವನ್ನು ಕೈಗೊಂಡು ಧ್ಯಾನದ ಶಿಬಿರಗಳನ್ನು ನಡೆಸಿದರು.
2022
ವಾಷಿಂಗ್ಟನ್ ಡಿ.ಸಿ.ಯ ನ್ಯಾಷನಲ್ ಮಾಲ್ನಲ್ಲಿ ಜಗತ್ತಿನ ಮೂಲೆಮೂಲೆಗಳಿಂದ ಆಮಿಸಿದ ಸುಮಾರು 17,000ಕ್ಕೂ ಹೆಚ್ಚು ಜನರು ಪ್ರದರ್ಶನ ನೀಡಿದ, ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನೊಳಗೊಂಡ ವಿಶ್ವ ಸಂಸ್ಕೃತಿ ಉತ್ಸವದಲ್ಲಿ 11ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿ ಗುರುದೇವರು ನಿರ್ದೇಶನದಲ್ಲಿ ಧ್ಯಾನ ಮಾಡಿದರು.
2023
ನಾನು ವಿಶ್ವ ಧ್ಯಾನ ಕಾರ್ಯಕ್ರಮದಲ್ಲಿ ಏಕೆ ಭಾಗವಹಿಸಬೇಕು 2025?
ಇದೊಂದು ಐತಿಹಾಸಿಕ ಕಾರ್ಯಕ್ರಮ
ಕಾರ್ಯಕ್ರಮದ ಬಗ್ಗೆ ಕೇವಲ ಓದುವುದಕ್ಕಿಂತ ಅದರ ಭಾಗವಾಗುವುದು ಒಳ್ಳೆಯದು. “ವಿಶ್ವಸಂಸ್ಥೆಯ ಮೊದಲ ಜಾಗತಿಕ ಧ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ” ಎಂಬ ಹೆಮ್ಮೆ ಯಾರಿಗೆ ಬೇಡ?
ಜಾಗತಿಕ ಮಟ್ಟದ ಧ್ಯಾನ ಕಾರ್ಯಕ್ರಮ
ಜಗತ್ತಿನಾದ್ಯಂತ ಲಕ್ಷಾಂತರ ಜನರು ಸಾಮೂಹಿಕವಾಗಿ ಧ್ಯಾನ ಮಾಡಲಿದ್ದಾರೆ. ಇದರಿಂದ ಒಬ್ಬೊಬ್ಬರೇ ಧ್ಯಾನ ಮಾಡುವುದಕ್ಕಿಂತ ಅನೇಕ ಪಟ್ಟು ಹೆಚ್ಚಿನ ಪ್ರಯೋಜನಗಳು ದೊರೆಯುತ್ತವೆ.
ಧ್ಯಾನದ ಪರಮಗುರುವಿನ ಮಾರ್ಗದರ್ಶನ
ಗುರುದೇವರ ಮಾರ್ಗದರ್ಶನದಲ್ಲಿ ಮಾಡುವ ಧ್ಯಾನವು ವಿಶಿಷ್ಟ ಅನುಭವವನ್ನು ನೀಡುತ್ತದೆ.
ವಿಶ್ವಸಂಸ್ಥೆಯಲ್ಲಿ 2015ರಲ್ಲಿ ನಡೆದ ಪ್ರಥಮ ಅಂತಾರಾಷ್ಟ್ರೀಯ ಯೋಗದಿನದಂದು ಗುರುದೇವರು ಯೋಗ ಮತ್ತು ಧ್ಯಾನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
೨೦೧೫ ರಲ್ಲಿ ಮೊದಲ ಅಂತರರಾಷ್ಟ್ರೀಯ ಯೋಗ ದಿನ.
ನೀವು ಉಸಿರಾಡಬಲ್ಲಿರಾದರೆ ನೀವು ಧ್ಯಾನವನ್ನೂ ಮಾಡಬಹುದು!
ಧ್ಯಾನದ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಆರಂಭಿಸಿ
ಗುರುದೇವರ ನಿರ್ದೇಶಿತ ಧ್ಯಾನ ಕಾರ್ಯಕ್ರಮಗಳು ಕೇವಲ ಆರಂಭ ಮಾತ್ರ. ನಿಮ್ಮ ಅಂತರ್ಗತ ಸಾಮರ್ಥ್ಯವನ್ನು ಪರಿಪೂರ್ಣವಾಗಿ ಬಳಸಿಕೊಂಡು ಸಂತೋಷಮಯ ಹಾಗೂ ಒತ್ತಡಮುಕ್ತ ಜೀವನವನ್ನು ನಡೆಸಲು ನಮ್ಮ ಪರಿವರ್ತನಶೀಲ ಧ್ಯಾನಶಿಬಿರಗಳ ನೆರವನ್ನು ಪಡೆಯಿರಿ.
ಸಹಜ ಸಮಾಧಿ ಧ್ಯಾನ ಯೋಗ
ಹೆಚ್ಚಾದ ಆಂತರಿಕ ಶಾಂತಿ • ಉತ್ತಮ ಆರೋಗ್ಯ • ಸುಧಾರಿತ ಮಾನಸಿಕ ಸ್ಪಷ್ಟತೆ • ಸೂಕ್ಷ್ಮ ಜ್ಞಾನದ ಅನಾವರಣ
* ನಿಮ್ಮ ಕೊಡುಗೆ ಆರ್ಟ್ ಆಫ್ ಲಿವಿಂಗ್ನ ಹಲವಾರು ಸಾಮಾಜಿಕ ಯೋಜನೆಗಳಿಗೆ ಸಹಕಾರಿಯಾಗಲಿದೆ
ಆನ್ಲೈನ್ ಮೆಡಿಟೇಶನ್ ಅಂಡ್ ಬ್ರೆತ್ ವರ್ಕ್ಶಾಪ್
ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ • ಒತ್ತಡವನ್ನು ನಿವಾರಿಸುತ್ತದೆ • ಸಂಬಂಧಗಳನ್ನು ಸುಧಾರಿಸುತ್ತದೆ • ಸಂತೋಷಮಯ ಸಾರ್ಥಕ ಜೀವನವನ್ನು ನಡೆಸಬಹುದು
* ನಿಮ್ಮ ಕೊಡುಗೆ ಆರ್ಟ್ ಆಫ್ ಲಿವಿಂಗ್ನ ಹಲವಾರು ಸಾಮಾಜಿಕ ಯೋಜನೆಗಳಿಗೆ ಸಹಕಾರಿಯಾಗಲಿದೆ
ಹ್ಯಾಪಿನೆಸ್ ಪ್ರೊಗ್ರಾಮ್
ಒತ್ತಡವನ್ನು ನಿವಾರಿಸುತ್ತದೆ • ಸಂಬಂಧಗಳಲ್ಲಿ ಸಾಮರಸ್ಯವನ್ನು ತರುತ್ತದೆ • ರೋಗನಿರೋಧಕ ಶಕ್ತಿಯು ವರ್ಧಿಸುತ್ತದೆ
* ನಿಮ್ಮ ಕೊಡುಗೆ ಆರ್ಟ್ ಆಫ್ ಲಿವಿಂಗ್ನ ಹಲವಾರು ಸಾಮಾಜಿಕ ಯೋಜನೆಗಳಿಗೆ ಸಹಕಾರಿಯಾಗಲಿದೆ
ಅಡ್ವಾನ್ಸ್ಡ್ ಮೆಡಿಟೇಶನ್ ಪ್ರೋಗ್ರಾಮ್ (AMP)
* ನಿಮ್ಮ ಕೊಡುಗೆ ಆರ್ಟ್ ಆಫ್ ಲಿವಿಂಗ್ನ ಹಲವಾರು ಸಾಮಾಜಿಕ ಯೋಜನೆಗಳಿಗೆ ಸಹಕಾರಿಯಾಗಲಿದೆ
ಇನ್ನೂ ಕೆಲವು ಪ್ರಶ್ನೆಗಳು…
ನನಗೆ ವಿಶೇಷ ಅರ್ಹತೆಗಳೇನಾದರೂ ಇರಬೇಕೆ?
ಮಕ್ಕಳೂ ಇದರಲ್ಲಿ ಭಾಗವಹಿಸಬಹುದೆ?
ಹೌದು, ಐದು ವರ್ಷಕ್ಕಿಂತ ದೊಡ್ಡ ಎಲ್ಲ ಮಕ್ಕಳೂ ಭಾಗವಹಿಸಬಹುದು.





