ಕೆಲವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೂ ಅವರಿಗೆ ಯಶಸ್ಸು ದೊರೆಯುವುದಿಲ್ಲ. ನೀವು ಈ ಸಂಗತಿಯನ್ನು ನಿಮ್ಮ ಸುತ್ತಮುತ್ತ ಗಮನಿಸಿರುತ್ತೀರಿ. ಅಂತಹ ವ್ಯಕ್ತಿಗಳಲ್ಲಿ ಇರುವ ದುರ್ಬಲವಾದ ಹಾಗೂ ನಕಾರಾತ್ಮಕವಾದ ಮಾನಸಿಕ ಶಕ್ತಿಯೇ ಇದಕ್ಕೆ ಕಾರಣ. ಈ ನಕಾರಾತ್ಮಕ ಭಾವಗಳನ್ನು ನಿವಾರಿಸಿಕೊಳ್ಳಲು ಧ್ಯಾನ ಅತ್ಯಗತ್ಯ.

ಧ್ಯಾನವು ಶಕ್ತಿಯನ್ನು ಪ್ರಚೋದಿಸುತ್ತದೆ

ಧ್ಯಾನವು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಧ್ಯಾನದಿಂದ ಜೀವಶಕ್ತಿ ಹೆಚ್ಚುತ್ತದೆ, ಬುದ್ಧಿ ಹರಿತವಾಗುತ್ತದೆ ಹಾಗೂ ಇತರರೊಂದಿಗೆ ನಮ್ಮ ಸಂವಹನ ಆಹ್ಲಾದಕರವಾಗುತ್ತದೆ. ನಮ್ಮ ಮಾತಿನ ಮೇಲೆ ಹೆಚ್ಚಿನ ಹಿಡಿತ ದೊರೆಯುತ್ತದೆ. ಮನಸ್ಸಿನ ಸಂಕಲ್ಪ ಶಕ್ತಿ ಹೆಚ್ಚಾಗುತ್ತದೆ. ಧ್ಯಾನವು ನಮ್ಮ ಹಣೆಬರಹವನ್ನೇ ಬದಲಾಯಿಸುತ್ತದೆ.
ಧ್ಯಾನವು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸುತ್ತದೆ, ತನ್ಮೂಲಕ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸುತ್ತದೆ. ಧ್ಯಾನವು ನಿಮಗೆ ಶಾಂತಿ, ನಿರಾಳತೆ ಮತ್ತು ಬಲವನ್ನು ಕೊಡುತ್ತದೆ. ಧ್ಯಾನ ಮಾಡುವ ನೀವು ಕರುಣೆ ಮತ್ತು ಸಹಾನುಭೂತಿಯನ್ನು ಹೊಂದುತ್ತೀರಿ. ನೀವು ವಿಷಯಗಳನ್ನು ಗ್ರಹಿಸುವ ರೀತಿ ಸುಧಾರಿಸುತ್ತದೆ. ನಿಮ್ಮ ಮನಸ್ಸಿನಲ್ಲಿ ಸ್ಪಷ್ಟತೆ ಉಂಟಾಗುತ್ತದೆ. ಧ್ಯಾನವು ಜನರೊಂದಿಗೆ ಏನು ಮಾತನಾಡಬೇಕು, ಬೇರೆ ಬೇರೆ ಸನ್ನಿವೇಶಗಳಲ್ಲಿ ಹೇಗೆ ಕ್ರಿಯಾತ್ಮಕವಾಗಿ ಇರಬೇಕು, ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸಬೇಕು ಎಂಬ ಅರಿವನ್ನು ನಿಮ್ಮಲ್ಲಿ ಮೂಡಿಸಿ ನಿಮ್ಮ ಸಂವಹನವನ್ನು ಉತ್ತಮಗೊಳಿಸುತ್ತದೆ.
ಪ್ರತಿದಿನ ಕೆಲವು ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ  ನಮ್ಮ ಮೇಲೆ ದೈವಿಕ ಪ್ರೀತಿಯ ಸಿಂಚನದ ಅನುಭವವನ್ನು ಪಡೆಯಬಹುದು.  ಜ್ಞಾನ, ಸಾಕ್ಷಾತ್ಕಾರ ಮತ್ತು ಪ್ರೇಮ – ಈ ಮೂರು ಅಂಶಗಳು ಜೀವನದಲ್ಲಿ ಅತ್ಯಗತ್ಯ. ಜಡ ಮತ್ತು ನೀರಸ ಜೀವನವನ್ನು ಯಾರೂ ಬಯಸುವುದಿಲ್ಲ. ಪ್ರತಿಯೊಬ್ಬರೂ  ಸರಸ ಜೀವನವನ್ನು ಬಯಸುತ್ತಾರೆ. ಸರಸ ಜೀವನದ ಆಧಾರ, ಪ್ರೇಮ.

ಧ್ಯಾನವು ನೆರೆಹೊರೆಯ ಜನರೊಂದಿಗೆ ನಿಮ್ಮ ಸಂವಹನವನ್ನು ಉತ್ತಮಗೊಳಿಸುತ್ತದೆ. ನಿಮ್ಮ ಮಾತುಗಳನ್ನು,  ಬೇರೆಬೇರೆ ಸನ್ನಿವೇಶಗಳಲ್ಲಿ ನಿಮ್ಮ ಕ್ರಿಯೆ ಪ್ರತಿಕ್ರಿಯೆಗಳನ್ನು ಅದು ಸುಧಾರಿಸುತ್ತದೆ.

– ಗುರುದೇವ ಶ್ರೀ ಶ್ರೀ ರವಿ‌ ಶಂಕರ್
sattva app logo

#1 ಜಾಗತಿಕ ಧ್ಯಾನದ ಆಪ್

ಬೇಕಾದಾಗ, ಬೇಕಾದಲ್ಲಿ ಗುರುದೇವರಿಂದ ನಿರ್ದೇಶಿತ ಧ್ಯಾನಗಳನ್ನು ಮಾಡಿರಿ!

ಯಶಸ್ಸಿನ ಪರಿವರ್ತಕ ಬಿಂದು

ನಮ್ಮೊಳಗೆ ಯಾವುದೇ ಸಕಾರಾತ್ಮಕ ಮನೋಭಾವವಿಲ್ಲದಿದ್ದರೆ, ಅಥವಾ ನಾವು ನಕಾರಾತ್ಮಕ ಮನೋಭಾವದಿಂದ ತುಂಬಿಕೊಂಡಿದ್ದರೆ ಪ್ರೇಮವನ್ನು ಅದರ ಮೂಲ ರೂಪದಲ್ಲಿ ಅನುಭವಿಸಲು ಸಾಧ್ಯವಿಲ್ಲ. ನಾವು ಪ್ರೇಮವನ್ನು ಕೋಪ, ದ್ವೇಷ, ಚಡಪಡಿಕೆ. ದುಗುಡ ಮುಂತಾದ ವಿಕೃತ ರೂಪಗಳಲ್ಲಿ ಮಾತ್ರ ಅನುಭವಿಸಬಹುದು. ಆದುದರಿಂದ ಈ ವಿಕಾರಗಳನ್ನು ಮನಸ್ಸಿನಿಂದ ದೂರವಿರಿಸುವ  ವಿಧಾನವನ್ನು ನಾವು ಕಲಿಯಬೇಕು. ಒಮ್ಮೆ ಮನಸ್ಸು ಈ ವಿಕಾರಗಳಿಂದ ಮುಕ್ತವಾದಾಗ, ವೈಯಕ್ತಿಕವಾಗಿ ಜೀವನದಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯತೊಡಗುತ್ತದೆ.
ಬೆಳಿಗ್ಗೆ ಎದ್ದ ನಂತರ, ಕೆಲಸವನ್ನು ಪ್ರಾರಂಭಿಸುವ ಮೊದಲು, ಕೇವಲ 10 ನಿಮಿಷಗಳ ಕಾಲ ಕುಳಿತುಕೊಳ್ಳಿ. ಸಂಜೆ ಎಲ್ಲಾ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿದ ನಂತರ ಊಟ ಮಾಡುವ ಮೊದಲು ಸ್ವಲ್ಪ ಸಮಯ ಕುಳಿತುಕೊಳ್ಳಿ. ಅಂತರಂಗದ ಆಳದಲ್ಲಿ, ಆತ್ಮನಲ್ಲಿ ವಿಶ್ರಮಿಸಿ. ನಂತರ ಪರಿಸ್ಥಿತಿ ಬದಲಾಗಲು ಪ್ರಾರಂಭವಾಗುತ್ತದೆ.

ಮನಸ್ಸಿನ ಮೂಲಕ ಉತ್ತಮ ದೈಹಿಕ ಆರೋಗ್ಯ

ಆಧುನಿಕ ಜೀವನಶೈಲಿಯ ಇಂದಿನ ಸನ್ನಿವೇಶಗಳಲ್ಲಿ ಕೂಡಾ ಧ್ಯಾನವು ಹೆಚ್ಚು ಉಪಯುಕ್ತವಾಗಿದೆ. ಇಂದು ನಮಗೆ ತೃಪ್ತಿಯನ್ನು ನೀಡುವ, ನಮ್ಮ ಕೆಲಸದಲ್ಲಿ ನಮಗೆ ಸಹಾಯ ಮಾಡುವ ಯಾವುದಾದರೂ ಇದ್ದರೆ ಅದು ಧ್ಯಾನ ಮತ್ತು ಶ್ರದ್ಧೆ.
ಸುಲಭವಾಗಿ ಆಳವಾದ ಧ್ಯಾನವನ್ನು, ಸಮಾಧಿಯನ್ನು ಅನುಭವಿಸಲು ನಾಲ್ಕು ಸೂತ್ರಗಳನ್ನು ನೀವು ಅನುಸರಿಸಬಹುದು.   ಮೊದಲನೆಯದು, ದೇವರು ಸರ್ವತ್ರ – ಎಲ್ಲಾ ಕಡೆ ಇದ್ದಾನೆ; ಎರಡನೆಯದು, ಸರ್ವದಾ – ಯಾವಾಗಲೂ ಇದ್ದಾನೆ; ಮೂರನೆಯದು ಅವನು ಎಲ್ಲರಿಗೂ ಸೇರಿದ್ದಾನೆ; ಮತ್ತು ನಾಲ್ಕನೆಯದಾಗಿ ಅವನು ಸರ್ವಶಕ್ತನಾಗಿದ್ದಾನೆ. ದೇವರು ನನಗಾಗಿ, ನನ್ನ ಪರವಾಗಿ ಇದ್ದಾನೆ. ಈ ಭಾವನೆಯೊಂದಿಗೆ ನಾವು ಬೆಳಿಗ್ಗೆ ಮತ್ತು ಸಂಜೆ ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಮತ್ತು ಧ್ಯಾನ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಪವಾಡ ನಡೆಯಲು ಪ್ರಾರಂಭವಾಗುತ್ತದೆ ಮತ್ತು ನಡೆಯುತ್ತಲೇ ಇರುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಇದು ಶ್ರದ್ಧೆ. ಯಾವುದು ಇರುತ್ತದೋ ಆದರೆ ಕಾಣಿಸುವುದಿಲ್ಲವೋ  ಅದು ಶ್ರದ್ಧೆ.

ಇಂದು ನಮಗೆ ತೃಪ್ತಿಯನ್ನು ನೀಡುವ, ನಮ್ಮ ಕೆಲಸದಲ್ಲಿ ನಮಗೆ ಸಹಾಯ ಮಾಡುವ ಯಾವುದಾದರೂ ಇದ್ದರೆ ಅದು ಧ್ಯಾನ ಮತ್ತು ಶ್ರದ್ಧೆ.

– ಗುರುದೇವ ಶ್ರೀ ಶ್ರೀ ರವಿ‌ ಶಂಕರ್

ಎಂಟು ವಾರಗಳವರೆಗೆ ದಿನಕ್ಕೆ ಎರಡು ಬಾರಿ 20 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ನಮ್ಮ ಮೆದುಳಿನಲ್ಲಿರುವ ಬೂದು ದ್ರವ್ಯ (Grey Matter)  ಹೆಚ್ಚಾಗುತ್ತದೆ ಮತ್ತು ಮೆದುಳಿನ ಸಂರಚನೆ ಬದಲಾಗುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ಇಂದು, ನಾವು ಭೂಮಿಯ ಮೇಲೆ ಪ್ರತಿ ಎರಡು ಸೆಕೆಂಡಿಗೆ ಏಳು ಜೀವಗಳನ್ನು ಕಳೆದುಕೊಳ್ಳಲು ಒತ್ತಡವೇ ಕಾರಣ. ಒತ್ತಡವನ್ನು ತಪ್ಪಿಸಲು ಸಾಧ್ಯವಿದೆ. ಒತ್ತಡವನ್ನು ನಿವಾರಿಸಲು ಧ್ಯಾನ ಒಂದು ಉತ್ತಮ ಮಾರ್ಗ.

ಹೃದಯಪೂರ್ವಕ ಸಂವಹನಕ್ಕಾಗಿ

ಜನರಲ್ಲಿ ಪರಸ್ಪರ ನಂಬಿಕೆ ಇದ್ದಾಗ ಸಂವಹನ ನಡೆಯುತ್ತದೆ. ನಂಬಿಕೆಯು ಅಳಿದಾಗ ಸಂವಹನ ಮುರಿದುಹೋಗುತ್ತದೆ; ಅನಾಹುತಗಳಿಗೆ ದಾರಿಯಾಗುತ್ತದೆ. ಸಂವಹನ, ಸಂವಹನ ಮತ್ತು ಸಂವಹನ – ಈ ಮೂರೇ ಕುಟುಂಬದಲ್ಲಿ, ಸಂಬಂಧದಲ್ಲಿ, ವ್ಯವಹಾರದಲ್ಲಿ ಅಥವಾ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧಕ್ಕೆ ಮುಖ್ಯ. ಸಂವಹನದಲ್ಲಿ ತಲೆಯಿಂದ ತಲೆಗೆ, ಹೃದಯದಿಂದ ಹೃದಯಕ್ಕೆ ಮತ್ತು ಆತ್ಮದಿಂದ ಆತ್ಮಕ್ಕೆ ಎಂಬ ಮೂರು ಮಟ್ಟಗಳಿವೆ.

ನಾವು ಶಾಂತಿಯನ್ನು ಹೇಗೆ ಸ್ಥಾಪಿಸಬಹುದು?

ಅಂತರಂಗದಲ್ಲಿ ಶಾಂತಿಯಿಲ್ಲದಿದ್ದರೆ ಬಹಿರಂಗದಲ್ಲೂ ಶಾಂತಿ ಇರುವುದಿಲ್ಲ. ಧ್ಯಾನದಿಂದ ಅಂತರಂಗದ ಶಾಂತಿ ದೊರೆಯುತ್ತದೆ. ಅಂತರಂಗದಲ್ಲಿ ಶಾಂತಿ ಇರುವಾಗ ನೀವು ಹೊರಗಣ ಶಾಂತಿಯನ್ನೂ ಸಾಧಿಸಬಹುದು. ನೀವು ಉದ್ವಿಗ್ನತೆ ಮತ್ತು ಹತಾಶೆಗೊಳಗಾಗಿದ್ದರೆ ಹೊರಗೆ ಶಾಂತಿಯನ್ನು ಉಂಟುಮಾಡಲು ಸಾಧ್ಯವಾಗುವುದಿಲ್ಲ.

ಕೇವಲ ಪದಗಳು ಮಾತ್ರ ಶಾಂತಿಯನ್ನು ಸೂಚಿಸುವುದಲ್ಲ. ಶಾಂತಿ ಒಂದು ತರಂಗ. ನೀವು ಅಂತರಂಗದಲ್ಲಿ ಶಾಂತ ಮತ್ತು ನಿರ್ಮಲವಾಗಿರುವಾಗ ನಿಮ್ಮ ಶಕ್ತಿ ಅನೇಕ ಪಟ್ಟು ಹೆಚ್ಚಾಗುತ್ತದೆ. ನೀವು ಬಲಶಾಲಿಯಾಗಿದ್ದರೆ ಯಾವ ಸ್ಥಳಕ್ಕೆ ಬೇಕಾದರೂ ಹೋಗಿ ಶಾಂತಿಯ ಬಗ್ಗೆ ಮಾತನಾಡಬಹುದು. ಧ್ಯಾನವು ನಿಮಗೆ ಅಂತರಂಗದ ಶಕ್ತಿಯನ್ನು ನೀಡುತ್ತದೆ. ಅದು ನಿಮ್ಮ ಸುತ್ತಲೂ ಶಮನಕಾರಿ ತರಂಗಗಳನ್ನು ಹರಡುತ್ತದೆ. ಈ ಕಾರಣದಿಂದಲೇ ಶಾಂತಿಗಾಗಿ ಧ್ಯಾನ ಮಾಡುವುದು ಅಗತ್ಯ.
ಧ್ಯಾನವು ವ್ಯಕ್ತಿಯ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ. ಇದು ಶಾಂತಿಯ ತರಂಗಗಳನ್ನು ಹರಡುತ್ತದೆ. ನೀವು ಧ್ಯಾನ ಮಾಡುವವರಾಗಿದ್ದರೆ ಇತರರ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಕಾರಾತ್ಮಕ ಮತ್ತು ಶಾಂತಿಯ ಸಂದೇಶಗಳನ್ನು ಜನರಿಗೆ ರವಾನಿಸುತ್ತೀರಿ.

ಶಾಪ ನೀಡುವ ಶಕ್ತಿಯ ಬಗ್ಗೆ ಎಚ್ಚರವಿರಲಿ

ಧ್ಯಾನ ಮಾಡುವವರು ಬಹಳ ಜಾಗರೂಕರಾಗಿರಬೇಕು. ಅವರು ಯಾರನ್ನೂ, ಯಾವಾಗಲೂ ಶಪಿಸಬಾರದು. ಅವರು ತಮ್ಮ ಮಾತುಗಳಲ್ಲಿ ನಕಾರಾತ್ಮಕ ಪದಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸಬಾರದು.
ಧ್ಯಾನ ಮಾಡುವುದರಿಂದ ನಿಮಗೆ ಅಪಾರ ಶಕ್ತಿ ಲಭಿಸುತ್ತದೆ. ಧ್ಯಾನ ಮಾಡುವಾಗ ನೀವು ಆಶೀರ್ವದಿಸುವ ಮತ್ತು ಶಾಪವನ್ನು ನೀಡುವ ಸಾಮರ್ಥ್ಯವನ್ನು ಪಡೆಯುತ್ತೀರಿ. ಮೊದಲು ಶಪಿಸುವ ಸಾಮರ್ಥ್ಯ, ನಂತರ ಆಶೀರ್ವದಿಸುವ ಸಾಮರ್ಥ್ಯ ಬರುತ್ತದೆ. ಧ್ಯಾನದಿಂದ ಪಡೆಯುವ ಶಕ್ತಿಯ ಹೆಚ್ಚಿನ ಭಾಗವನ್ನು ಕೆಲವು ಕೆಟ್ಟ ಮಾತುಗಳು ಕುಂದಿಸಬಹುದು. ಆದುದರಿಂದ ಕೆಟ್ಟ ಮಾತುಗಳನ್ನು ಆಡುವುದು ಬುದ್ಧಿವಂತಿಕೆಯ ಲಕ್ಷಣವಲ್ಲ.
ಮನಸ್ಸಿನಲ್ಲಿ ಹುಟ್ಟುತ್ತದೆ. ಅಹಿತಕರ ಪ್ರಶ್ನೆಯೊಂದು ಹೃದಯದಲ್ಲಿದ್ದಾಗ ಅದು ಹಿಂಸೆ ಹಾಗೂ ಆಕ್ರಮಣಶೀಲತೆಯ ರೂಪ ತಾಳುತ್ತದೆ. ಆಕ್ರಮಣಶೀಲತೆ ಮತ್ತು ಹಿಂಸೆಯು ಗಾಳಿಯಲ್ಲಿ ಹುಟ್ಟಿಕೊಳ್ಳುವುದಿಲ್ಲ. ಇದು ಮಾನವರ ಹೃದಯ ಮತ್ತು ಮನಸ್ಸಿನಲ್ಲಿ ಹುಟ್ಟುತ್ತದೆ. ಇದು ಮೊದಲು ವ್ಯಕ್ತಿಯಲ್ಲಿ ಪ್ರಾರಂಭವಾಗಿ, ಕ್ರಮೇಣ ಕುಟುಂಬಕ್ಕೆ ಮತ್ತು ಸಮುದಾಯಗಳಿಗೆ ಹರಡುತ್ತದೆ. ನಂತರ ಅದು ಕಾಳ್ಗಿಚ್ಚಿನ ರೂಪ ತಾಳುತ್ತದೆ. ಈ ಸಮಸ್ಯೆಯ ಮೂಲವನ್ನು ನಾವು ಗಮನಿಸಬೇಕು. ಜನರಿಲ್ಲದ ದೇಶದಲ್ಲಿ ರೋಗ ಹರಡುವುದಿಲ್ಲ. ರೋಗವು ಹುಟ್ಟುವುದು ಜನರಲ್ಲಿ. ಅದೇ ರೀತಿ, ಯುದ್ಧವೂ ಜನರ ಮನಸ್ಸಿನಲ್ಲಿ ಹುಟ್ಟುತ್ತದೆ.
ಗುಂಪು ಮನೋಭಾವ ಎಂಬುದೊಂದಿದೆ. ಒಬ್ಬ ವ್ಯಕ್ತಿಯ ಕೋಪವು ಅನೇಕ ಜನರ ಮೇಲೆ ಪ್ರಭಾವ ಬೀರಿ ಅವರೆಲ್ಲರೂ ಸಾಮೂಹಿಕವಾಗಿ ಹಿಂಸೆಯಲ್ಲಿ ತೊಡಗಿಕೊಳ್ಳುವ ರೀತಿಯಲ್ಲಿಯೇ ಸಾಮೂಹಿಕ ಶಾಂತಿಯೂ ನೆಲೆಸಬಹುದು. ಗುಂಪು ಹಿಂಸೆಯು ಒಬ್ಬಿಬ್ಬರ ಮನಸ್ಸಿನಲ್ಲಿ ಹುಟ್ಟಿ ನಂತರ ಅದು ಇಡೀ ಗುಂಪನ್ನು ಆವರಿಸುತ್ತದೆ. ಅದೇರೀತಿ, ಒಬ್ಬಿಬ್ಬರ ಪ್ರಯತ್ನದಿಂದ ಶಾಂತಿಯೂ ಉಂಟಾಗಬಹುದು.
ಇಂದು ಆಕ್ರಮಣಶೀಲತೆ ಮತ್ತು ಖಿನ್ನತೆ ಎಂಬ ಎರಡು ದೊಡ್ಡ ಸಮಸ್ಯೆಗಳನ್ನು ಜಗತ್ತು ಎದುರಿಸುತ್ತಿದೆ. ವ್ಯಕ್ತಿಯೊಬ್ಬ ಒಂದೋ ಆಕ್ರಮಣಕಾರಿಯಾಗಿರುತ್ತಾನೆ; ಸಮಾಜದಲ್ಲಿ ಹಿಂಸಾಚಾರವನ್ನು ಉಂಟುಮಾಡುತ್ತಾನೆ ಅಥವಾ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮುಂತಾದ ಕ್ರಮಗಳ ಮೂಲಕ ತನ್ನನ್ನೇ ತಾನು ಹಿಂಸಿಸಿಕೊಳ್ಳುತ್ತಾನೆ. ಈ ಎರಡೂ ಸಮಸ್ಯೆಗಳಿಗೆ ಧ್ಯಾನವೇ ಉತ್ತರವಾಗಿದೆ.

    Wait!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity


    *
    *
    *
    *
    *