ಜಿಲ್ಲಾ ಅಭಿವೃದ್ಧಿ ಸಮಿತಿ

ದಿನೇ ದಿನೇ ಬೃಹತ್ತಾಗಿ ಬೆಳೆಯುತ್ತಿರುವ ನಮ್ಮ ಸಂಸ್ಥೆಗೆ ವಿಕೇಂದ್ರೀಕರಣ ಅಗತ್ಯವಿದೆ. ಕರ್ನಾಟಕದಲ್ಲಿ ನಮ್ಮ ಸಂಸ್ಥೆಯ ಕಾರ್ಯಕ್ರಮಗಳು ವಿಸ್ತರಣ ಆಗಬೇಕಿದ್ದರೆ ಅದಕ್ಕೆ ಒಂದು ಗೋಪುರಾಕಾರದ ರಚನೆ ಪೂರಕವಾಗುತ್ತದೆ ಎನ್ನುವ ದೃಷ್ಟಿಯಿಂದ ಗುರುಗಳು ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮಗಳ ಹಂತದಲ್ಲಿ ನಾಯಕರನ್ನು ನೇಮಕ ಮಾಡಲು ಸೂಚಿಸಿದರು. ನಮ್ಮ ಸಂಸ್ಥೆಯ ಪ್ರಮುಖ ಎರಡು ಅಂಶಗಳಾದ ಶಿಬಿರಗಳು ಮತ್ತು ಸೇವಾಕಾರ್ಯಕ್ರಮ ಯೋಜನೆಗಳಿಗೆ ಸಹಾಯಕವಾಗುವ ಹಾಗೆ ಎಲ್ಲಾ ಹಂತಗಳಲ್ಲಿ ಶಿಕ್ಷಕರ ಹಾಗೂ ಆಡಳಿತ ವಿಭಾಗದ ಅಧಿಕಾರಿಗಳನ್ನು ನೇಮಕ ಮಾಡುವ ಒಂದು ಹಾದಿಯಲ್ಲಿ ಕರ್ನಾಟಕ ತೊಡಗಿದೆ. ಈಗಾಗಲೇ 500 ಗಣ್ಯವ್ಯಕ್ತಿಗಳು ಮೀರಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ನಾಯಕರ ನೇಮಕವಾಗಿದೆ. ಈ ರೀತಿಯ ಸಬಲೀಕರಣದಿಂದ ಶಿಕ್ಷಕರು ಆಡಳಿತ ವಿಭಾಗದ ಜವಾಬ್ದಾರಿಗಳಿಂದ ಮುಕ್ತರಾಗಿ ಹೆಚ್ಚು ಹೆಚ್ಚು ಜ್ಞಾನ ಶಿಬಿರಗಳನ್ನು ನಡೆಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಹೆಚ್ಚಾಗಿ ಸ್ವಯಂಸೇವಕರು ಸಹ ತಯಾರಾಗುತ್ತಿದ್ದಾರೆ.


ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 080- 67433609/ 8904466274
ಇ-ಮೇಲ್: ddc.coordinator@vvki.net , kwf@vvki.net